ಕೇಸರಿ ಒಂದು ಮರಾಠಿ ದಿನಪತ್ರಿಕೆಯಾಗಿದ್ದು, ಇದು 1881 ರಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನಾಯಕ ಲೋಕಮಾನ್ಯ ಬಾಲ ಗಂಗಾಧರ ತಿಲಕರಿಂದ ಸ್ಥಾಪಿಸಲ್ಪಟ್ಟಿತು. ಈ ವೃತ್ತಪತ್ರಿಕೆ ಭಾರತೀಯ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ಒಂದು ಭಾಗವಾಗಿ ಬಳಸಲ್ಪಟ್ಟಿತು ಮತ್ತು ಕೇಸರಿ ಮರಾಠ ಟ್ರಸ್ಟ್ ಮತ್ತು ತಿಲಕರ ವಂಶಸ್ಥರು ಇದನ್ನು ಪ್ರಕಟಿಸಿದರು. ಬಾಲ ಗಂಗಾಧರ ತಿಲಕ್ ಅವರ ಎರಡು ಪತ್ರಿಕೆಗಳಾದ ಕೇಸರಿ, ಮರಾಠಿ ಮತ್ತು ಮರಾಠಾ (ಕೇಸರಿ-ಮರಾಠಾ ಟ್ರಸ್ಟ್ನಿಂದ ಚಾಲಿತ ) ಅನ್ನು ಕೇಸರಿ ವಾಡಾ, ನಾರಾಯಣ ಪೇಟ್ , ಪುಣೆಯಿಂದ ಇಂಗ್ಲಿಷ್ನಲ್ಲಿ ಪ್ರಕಟಿಸುತ್ತಿದ್ದರು. ಚಿಪ್ಪುನ್ಕುರ್, ಅಗಾರ್ಕರ್ ಮತ್ತು ತಿಲಕರಿಂದ ಪತ್ರಿಕೆಗಳು ಮೂಲತಃ ಸಹಕಾರವಾಗಿ ಪ್ರಾರಂಭಿಸಲ್ಪಟ್ಟವು. == ಆರಂಭಿಕ ವರ್ಷಗಳು, ಸಂಪಾದಕರು ಮತ್ತು ಬರಹಗಾರರು == ಕೇಸರಿ ಸಂಪಾದಕರಲ್ಲಿ ಹಲವಾರು ಸ್ವಾತಂತ್ರ್ಯ ಯೋಧರು ಮತ್ತು ಸಾಮಾಜಿಕ ಕಾರ್ಯಕರ್ತರು / ಸುಧಾರಕರು, ಅಗರ್ಕರ್ (ಅದರ ಮೊದಲ ಸಂಪಾದಕ), ಚಿಪ್ಲುನ್ಕರ್ ಮತ್ತು ತಿಲಕ್ ಮೊದಲಾದವರು ಸೇರಿದ್ದಾರೆ. 1887 ರಲ್ಲಿ ಅಗರ್ಕರ್ ತಮ್ಮ ಸ್ವಂತ ಸುದ್ದಿ ಪತ್ರಿಕೆಯಾದ ಸುಧಾರಕ್ (ದಿ ರಿಫಾರ್ಮರ್) ಅನ್ನು ಪ್ರಾರಂಭಿಸಲು ಕೇಸರಿಯನ್ನು ಬಿಟ್ಟು, ನಂತರದ ದಿನಗಳಲ್ಲಿ ತಿಲಕ್ ತಮ್ಮದೇ ಆದ ಪತ್ರಿಕೆ ಪ್ರಕಟಿಸುತ್ತಿದ್ದರು.' == ಉಲ್ಲೇಖ ==